Monday, 8 October 2012

ಅವರವರ ಭಾವಕ್ಕೆ-ಅವರವರ ಭಕುತಿಗೆ

ಕೆಲವೊಂದು ಭಾವನೆಗಳು ನನ್ನನ್ನು ತೀವ್ರವಾಗಿ ಕಾಡುತ್ತವೆ

.ನಾನು ಒಮ್ಮೆ ನಮ್ಮ ಮನೆಯ ಹೂ ತೋಟದಲ್ಲಿ ಒಂದು ಜಾತಿಯ  ಕಳ್ಳಿ ಗಿಡವನ್ನು ಬೆಳೆಸಿದ್ದೆ .ಅದು ಕುಂಡದ ತುಂಬಾ ಹೂವುಗಳನ್ನು ಬಿಟ್ಟು ಅಂದವಾಗಿ ಕಂಗೊಳಿಸುತ್ತಿತ್ತು .ಒಂದು ದಿನ ನಮ್ಮ ಮನೆಯ ಕೆಲಸದವಳು "ಅಮ್ಮಾ, ಈ ಗಿಡ ಮಾಡಿದವರ ಮನೆಯ ಯಜಮಾನನಿಗೆ ಅಪಾಯವಂತೆ" ಎಂದು ಅರುಹಿದಳು .ಅದು ನನ್ನನ್ನು ತುಂಬಾ ಚಿಂತೆಗೀಡು ಮಾಡಿತು.ಮೂಡ ನಂಬಿಕೆಯೆಂದು ತಿಳಿದರೂ ನಾನು ಅದನ್ನು ಕಡೆಗಣಿಸ ಲಾರದೇ  ಹೋದೆ .ಯಾಕೆ ಗೊತ್ತಾ ? ಒಂದು ವೇಳೆ ಅದರಿಂದ ನನ್ನವರಿಗೆನಾದರೂ ಅಪಾಯವಾದರೆ , ಅದು ಕಾಕತಾಳೀಯವೇ ಆದರೂ ,ನನ್ನವರ ಬಗ್ಗೆ ನನ್ನ ನಿಷ್ಠೆ ಕಡಿಮೆಯಾದಂತಲ್ಲವೇ ? ಕೇವಲ ಒಂದು ಹೂವಿನ ಗಿಡಕ್ಕಾಗಿ ನಾನು ಯಾಕೆ ಅಂತಹ ರಿಸ್ಕ್ ತೆಗೆದುಕೊಳ್ಳಬೇಕು ?ಯಾಕೆಂದರೆ ಇದು ಪ್ರಯೋಗ ಮಾಡುವ ವಿಶಯವಲ್ಲವಲ್ಲ .

ಏನೆಲ್ಲಾ ಚಿಂತಿಸಿ ಚಿಂತಿಸಿ ಕೊನೆಗೆ ಆ ಗಿಡವನ್ನು ಕೆಲಸದವಳ ಹತ್ತಿರ ಯಾರಿಗಾದರು" ಹೀಗೆ ಅಂತ ಹೇಳಿ" ಕೊಡು ಎಂದು ಕೊಟ್ಟುಬಿಟ್ಟೆ .ಅವರು ಯಾರೋ "ಅಯ್ಯೋ ಇಷ್ಟು ಚಂದದ ಗಿಡ ,ಅದೆಲ್ಲ ಬರಿ ಸುಳ್ಳು " ಎಂದು ತಗೊಂಡ್ರಂತೆ! ಆದರೆ ನನಗನಿಸಿದ್ದು "ಮೂಡ ನಂಬಿಕೆಯಾದರೂ ,ಅವರವರ ಭಾವಕ್ಕೆ, ಅವರವರ ಭಕುತಿಗೆ ಅನುಗುಣವಾಗಿ ,ಒಂದೊಂದು ವಿಷಯ ಪರಿಗಣಿಸಲ್ಪಡುತ್ತದೆ (ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ !)

3 comments:

nanda hegde said...

ಬರಹ ಅಪೂರ್ಣವಾಗಿದೆ.

Unknown said...

Nice writing....

Anonymous said...

ಬರಹ ಅಪೂರ್ಣ...... ಏಕೆ ಹಾಗನ್ನಿಸಿತೋ !!